ಹೇಗೆ ಮರೆಯಲು ಸಾಧ್ಯ? ಪತಂಗದ ಹುಳುಗಳನ್ನು ಹಿಡಿದು ದಾರಕಟ್ಟಿ ಹಾರಿಸಿಬಿಟ್ಟ ಆದಿನಗಳನ್ನು ,ಸೋಲ್ಳೆಗಾತ್ರದ ಪರಿಗೆ ಹಣ್ಣಿಗಾಗಿ ಹರಸಾಹಸಪಟ್ಟ ,ಮಾವಿನ ಕಾಯಿ ಕದಿಯಲು ಹೋಗಿ ಸಿಕ್ಕಿ ಕೊಂಡು ಯುಧ್ಧ ಕೈದಿಗಳಂತೆ ಕೈಕಟ್ಟಿ ನಿತ್ತಿದ್ದು , ಕಪ್ಪೆ ಓತಿಕ್ಯಾತ ಗಳಿಗೆ ಅಂತ್ಯ ಸಂಸ್ಕಾರ ಮಾಡಿದ್ದು ,ದಸರಾ ರಜೆಗಾಗಿ ಕಾದು ಕುಳಿತದ್ದು,ಬುಗುರಿ ಆಡಿಗುನ್ನ ಹೊಡೆದು ಗೆಳೆಯರ ಬುಗುರಿ ಒಡೆದು ವಿಜಯೋತ್ಸಾಹ ಆಚರಿಸಿದ್ದು ,ಕೀಟಲೆ ಮಾಡಿ ದಿನಗಟ್ಟಲೆ ಒಂಟಿಕಾಲಲ್ಲಿ ನಿತ್ತಿದ್ದು ......ಇದನ್ನೆಲ್ಲ ಹಾಗೆಯೇ ಮೆಲುಕು ಹಾಕದೆ ಇರುವುದಾದರೂ ಹೇಗೆ .....ದಿನದ ಜಂಜಡಗಳ ನಡುವೆ ಹಾಗೆ ಕಳೆದು ಹೋಗಿದೆ ಬದುಕು.............

No comments:
Post a Comment